ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ (ನಿ). ಎಂದ ತಕ್ಷಣ ಇಂದಿನ ದಿನಗಳಲ್ಲಿ ಗೋಚರಿಸುವುದು ತ್ವರಿತ, ಸ್ನೇಹಪೂರ್ವ ಸೇವೆ, ಉತ್ತಮ ಇಳುವರಿ,ಠೇವಣಿಗಳಿಗೆ ಸುಭದ್ರತೆ.
ಸಹಕಾರ ಕ್ಷೇತ್ರದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ನಮಗಾಗುವ ಹಲವಾರು ವಿಚಾರಗಳ ನೇರ ಅನುಭವದ ಆಧಾರದಲ್ಲಿ ಹೆಮ್ಮೆಯ ವಿಚಾರ ಹೇಳುವುದಾದರೆ ನಾವು ಈ ಬಾರಿ 6 ಶಾಖೆಗಳನ್ನು ನಮ್ಮಂತಹ ಬ್ಯಾಂಕಿನ ಸೇವೆ ಅಗತ್ಯ ಇರುವ ಸ್ಥಳಗಳಲ್ಲಿ ಆರಂಭಿಸಿರುವುದು.
ಆದರೂ ದೇಶದ ಜನ ಸಂಖ್ಯೆಯ ಶೇ.19ರಷ್ಟು ಜನರು ಇನ್ನೂ ಎಲ್ಲಾ ರೀತಿಯ ಹಣಕಾಸು ಸೇವೆಯಿಂದ ಹೊರಗುಳಿದಿದ್ದಾರೆ. ಎಂದು ಇತ್ತೀಚಿನ ಸ್ಪರ್ಧೆಗಳಿಂದ ತಿಳಿದು ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು7 ದಶಕಗಳೇ ಕಳೆದಿದ್ದರೂ ದೇಶದ ಜನ ಸಂಖ್ಯೆಯ ಒಂದು ದೊಡ್ಡ ಭಾಗ ಈಗಲೂ ಬ್ಯಾಂಕಿಂಗ್ ಸೇವಾ ಸೌಲಭ್ಯಗಳಿಂದ ವಂಚಿತರಾಗಿರುವುದು ಯಾರಿಗೂ ಶೋಭೆತರುವ ವಿಚಾರವಲ್ಲ್ಲ.
ವಿಶ್ವ ಬ್ಯಾಂಕಿನ ಜಾಗತಿಕ ಹಣಕಾಸು ಸೂಚ್ಯಂಕದ ಪ್ರಕಾರ ನಮ್ಮ ದೇಶದ ಜನ ಸಂಖ್ಯೆಯ ಶೇ.53ರಷ್ಟು ಜನ ಮಾತ್ರ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದಾರೆ. ಶೇ.14.4ರಷ್ಟು ಜನ ಮಾತ್ರ ತಮ್ಮ ಖಾತೆಗಳಲ್ಲಿ ಉಳಿತಾಯದ ಹಣ ಇಟ್ಟಿದ್ದಾರೆ ಎನ್ನುವುದು ಆಶಾದಾಯಕ ವಿಚಾರವಲ್ಲ.
ಈ ನಿಟ್ಟಿನಲ್ಲಿ ನಾವು ಶಾಖೆಗಳನ್ನು ವಿಸ್ತರಿಸಿ ಸೇವಾ ಮಟ್ಟದ ಪರಿಧಿಯನ್ನು ಹೆಚ್ಚಿಸುವಲ್ಲಿ ಹೆಜ್ಜೆಯನ್ನು ಇರಿಸುತ್ತಿದ್ದೇನೆ ಎಂದು ತಿಳಿಸಲು ಸಂತೋಷವಾಗುತ್ತದೆ.
ಠೇವಣಿದಾರರು ಆದಾಯತೆರಿಗೆ ವಿಚಾರದಲ್ಲಿ ತಪ್ಪು ಮಾಹಿತಿ ಹೊಂದಿದ್ದು ಠೇವಣಿ ಮಾಡಲು ಹಿಂಜರಿಯುತ್ತಿರುವುದು ಕಂಡುಬಂದಿದೆ. ನಮ್ಮ ಬ್ಯಾಂಕಿನ ಹೆಚ್ಚಿನ ಬಡ್ಡಿದರದಿಂದ ನೀವು ಠೇವಣಿ ಮೇಲೆ ಆದಾಯತೆರಿಗೆ ಪಾವತಿಸಿದರೂ ಬಡ್ಡಿ ದೊರಕುವ ಮೊಬಲಗು ಇತರೆ ಬ್ಯಾಂಕುಗಳಿಗಿಂತ ಹೆಚ್ಚಿಗೆ ಆಗಿರುತ್ತದೆ. ಠೇವಣಿ ಮಾಡದೇ ಇರಿಸಿಕೊಳ್ಳುವವರು ಹಲವಾರು ಮಂದಿ ಇದ್ದಾರೆ ಇದು ಗಳಿಕೆ ಇಲ್ಲದ ಹಣ. ಉಳಿತಾಯ ಖಾತೆ ಇಂತಹ ರಿಸ್ಕ್ಫ್ರೀ ಹೂಡಿಕೆಗೆ ಉತ್ತಮ ಮಾರ್ಗವಾಗಿದೆ. ನಿಶ್ಚಿತ ಠೇವಣಿಗೆ ಹೋಗುವ ಮೊದಲ ಹಂತದ ಹೂಡಿಕೆಯಾಗಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಉಳಿತಾಯ ಖಾತೆಯ ದಿನದಂಚಿನ ಉಳಿತಾಯದ ಮೇಲೆ ಶೇ.4.50 ಮತ್ತು ಶೇ.6.50 ಬಡ್ಡಿಜಮಾ ಮಾಡುವ ಪದ್ಧತಿ ಉಳಿತಾಯ ಖಾತೆದಾರರಿಗೆ ಪ್ರೋತ್ಸಾಹದಾಯಕವಾಗಿದೆ. ಹಣವನ್ನು ತೀವ್ರ ಅಗತ್ಯತೆಗಳಿಗೆ ಲಭ್ಯವಿರಲಿ ಎಂದು ನಮ್ಮ ಬ್ಯಾಂಕಿನಲ್ಲಿ ಕೆಲಸದ ವೇಳೆ ಬೆಳಗ್ಗೆ 10.00 ರಿಂದ 2.00 ತನಕ ಮಧ್ಯಾಹ್ನ3.00ರಿಂದ ಸಂಜೆ6.00 ರತನಕ ವ್ಯವಹಾರಿಸುವ ಉತ್ತಮ ಸೌಲಭ್ಯ ಇರುತ್ತದೆ. ಲಾಕರ್ ಗೆ ಕೂಡ ಈ ಸಮಯ ಅನ್ವಯವಾಗುತ್ತದೆ.
ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನಿಂದ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನತೆಗೆ ಹೊರೆಯಾಗುತ್ತಿದೆ ಎಂದು ಮಾನ್ಯ ರಾಷ್ಟ್ರಪತಿಯವರು ಹೇಳಿದ್ದಾರೆ. ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದು NPA ಅತೀ ಕನಿಷ್ಠ ಹೊಂದಿದ ಸಹಕಾರಿ ಬ್ಯಾಂಕ್ ಆಗಿರುತ್ತದೆ.
ನಮ್ಮ ಬ್ಯಾಂಕಿನ ಪ್ರಗತಿ ನೋಟ ಈಗಾಗಲೇ ನಿಮ್ಮ ಕೈ ಸೇರಿರುತ್ತದೆ. ಸಂದ ಶೇರು ಬಂಡವಾಳ, ಠೇವಣಿಗಳು, ಸಾಲಮುಂಗಡ, ಹೂಡಿಕೆಗಳು, ದುಡಿಯುವ ಬಂಡವಾಳ, ನಿವ್ವಳ ಲಾಭ, ನೆಟ್ ವರ್ಥ್, ಕ್ಯಾಪಿಟಲ್ ಅಡಕ್ವೆಸಿ ಮುಂತಾದ ಪ್ರಮುಖ ಅಂಶಗಳಲ್ಲಿ ಬ್ಯಾಂಕು ಗಮನಾರ್ಹ ಸಾಧನೆ ಮಾಡಿರುವುದನ್ನು ತಾವು ಗಮನಿಸಬಹುದಾಗಿದೆ. ಇದು ನಿಮ್ಮೆಲ್ಲರ ತುಂಬು ಹೃದಯದ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳುತ್ತೇನೆ.
ಬ್ಯಾಂಕುಗಳ ಎನ್.ಪಿ.ಎ. ಸಾಲದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಭಾರತೀಯ ರಿಸರ್ವ ಬ್ಯಾಂಕ್ ಹೊಸ ಮಾರ್ಗದರ್ಶಿ ಸೂತ್ರ ಈಗಾಗಲೇ ಪ್ರಕಟಿಸಿದೆ. ದೊಡ್ಡ ಮೊತ್ತದ NPA ಕಾಲಮಿತಿಯೊಳಗೆ ಪರಿಹರಿಸಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ದೀವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆಕೈಗೊಳ್ಳಲು ಕಡ್ಡಾಯವಾಗಿ ಶಿಫಾರಸ್ಸು ಮಾಡಬೇಕು. ಈ ನಿಯಮಗಳನ್ನು ಪಾಲಿಸದ ಬ್ಯಾಂಕಿಗೆ ದಂಡ ವಿಧಿಸಲಾಗುವುದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡದೇ ಸುಸ್ತಿದಾರರಾಗುವ ಖಾತೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸಾಲ ವಸೂಲಿಯಕ್ರಮ ಕೈಗೊಳ್ಳಬೇಕು ಎಂದು ಹೊಸ ಪ್ರಸ್ತುತಿಯಲ್ಲಿ ತಿಳಿಸಲಾಗಿದೆ. RBIನ ಕ್ರಮ ಹೆಚ್ಚು ಪಾರದರ್ಶಕವಾಗಿದ್ದು ನಮ್ಮ ಬ್ಯಾಂಕು ಕೂಡಾ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.
ವಂದನೆಗಳು.
ಸತ್ಯನಾರಾಯಣಟಿ.ಎಸ್.
B.Com. CAIIB.ಉಪಾಧ್ಯಕ್ಷರು